Friday, January 13, 2023

ಸರ್ ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ ಆಚರಣೆ

ಭದ್ರಾವತಿ ಬೊಮ್ಮನಕಟ್ಟೆ ಸರ್ ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ ಆಚರಿಸಲಾಯಿತು.  
    ಭದ್ರಾವತಿ, ಜ. ೧೩ : ನಗರದ ಬೊಮ್ಮನಕಟ್ಟೆ ಸರ್ ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ ಆಚರಿಸಲಾಯಿತು.  
     ಪ್ರೊ. ಬಿ.ಪಿ ಮಹದೇವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರದ ವಿವೇಕ ಜಾಗ್ರತಿ ಬಳಗದ ಲೀಲಾವತಿ ಸದಾಶಿವ ಮಾತನಾಡಿ, ವಿವೇಕಾನಂದರ ಆದರ್ಶಗಳು ಪ್ರಸ್ತುತ ಜೀವನಕ್ಕೆ ಬಹಳ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.
    ಪೊ. ಡಿ. ರಮೇಶ್, ಪ್ರೊ. ಬಿ. ವಸಂತ ಕುಮಾರ್, ಪ್ರೊ. ಅರಸಯ್ಯ, ಡಾ. ಎಂ.ಸಿ ಪ್ರಭಾಕರ್ ಸೇರಿದಂತೆ ಅಧ್ಯಾಪಕ ಹಾಗು ಅಧ್ಯಾಪಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಸಿ. ಸೋಮಶೇಖರ್ ಸ್ವಾಗತಿಸಿ, ಪ್ರೊ. ಡಿ. ಉಮೇಶ್ ವಂದಿಸಿದರು.

No comments:

Post a Comment