Sunday, April 2, 2023

ಯುವ ಮುಖಂಡ ಎಸ್. ಅರುಣ್‌ಕುಮಾರ್ ನೇತೃತ್ವದಲ್ಲಿ ೧೦೦ಕ್ಕೂ ಮಂದಿ ಕಾಂಗ್ರೆಸ್‌ಗೆ ಸೇರ್ಪಡೆ

ಭದ್ರಾವತಿ ಹೊಸ ಸಿದ್ದಾಪುರ ರಾಮಕೃಷ್ಣ ಬಡಾವಣೆ ನಿವಾಸಿ, ಸುಮಾರು ೨೦ ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಯುವ ಮುಖಂಡ ಎಸ್. ಅರುಣ್‌ಕುಮಾರ್ ಮಾ.೩೧ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದು, ಈ ಹಿನ್ನಲೆಯಲ್ಲಿ ಭಾನುವಾರ ಪಕ್ಷದ ಸ್ಥಳೀಯ ಮುಖಂಡರು ಅಭಿನಂದಿಸಿದರು.
    ಭದ್ರಾವತಿ, ಏ. ೨ : ನಗರದ ಹೊಸ ಸಿದ್ದಾಪುರ ರಾಮಕೃಷ್ಣ ಬಡಾವಣೆ ನಿವಾಸಿ, ಸುಮಾರು ೨೦ ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಯುವ ಮುಖಂಡ ಎಸ್. ಅರುಣ್‌ಕುಮಾರ್ ಬೆಂಬಲಿಗರು ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಬೆಂಗಳೂರಿನಲ್ಲಿ ಮಾ.೩೧ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದ ಅರುಣ್‌ಕುಮಾರ್‌ರವರು ತಮ್ಮ ನಿವಾಸದಲ್ಲಿ ಸುಮಾರು ೧೦೦ ಮಂದಿ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸುವ ಮೂಲಕ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷದ ಅಭ್ಯರ್ಥಿ, ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೆಲುವಿಗೆ ಶ್ರಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಸದಸ್ಯ ಸೈಯದ್ ರಿಯಾಜ್ ಅಹಮದ್, ಮುಖಂಡರಾದ ಬಾಲಕೃಷ್ಣ, ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ಮಾತನಾಡಿ, ಕ್ಷೇತ್ರದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಹಾಗು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ  ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
    ಮುಖಂಡರಾದ ಬಿ.ಎಸ್ ಗಣೇಶ್, ರಾಮಚಂದ್ರ, ರೂಪ ನಾಗರಾಜ್, ಶರವಣ, ನರಸಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಜೇಂದ್ರ ನಿರೂಪಿಸಿದರು.
    ನಿಂಗರಾಜ್, ಸುರೇಶ್, ಎನ್. ವೆಂಕಟೇಶ್, ಉಮೇಶ್, ಜಾನ್‌ಸನ್, ಅಲಿ, ದತ್ತಗಿರಿ, ದಾದಾ, ಬಾಬು, ಹಾಲಪ್ಪ, ಬಾಬುರಾವ್, ಕಿಟ್ಟಿ, ಸಂತೋಷ್, ಕಿರಣ, ಲೋಹಿತ್, ಜಗನ್ನಾಯ್ಕ, ಕುಮಾರ, ಸುನಿಲ್, ಗಿರೀಶ್, ಕೆಂಪರಾಜು, ನಿಂಗಪ್ಪ, ವಾಸು ಸೇರಿದಂತೆ ಸುಮಾರು ೧೦೦ ಮಂದಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.  

No comments:

Post a Comment