Friday, June 4, 2021

ಸಾರಿಗೆ ಸಂಸ್ಥೆಗೆ ‘ಶ್ರೀ ದೇವರ ದಾಸಿಮಯ್ಯ’ ಹೆಸರು ನಾಮಕರಣಗೊಳಿಸಿ : ಎಚ್.ಎಸ್ ಕುಮಾರಸ್ವಾಮಿ ಮನವಿ

ಎಚ್.ಎಸ್ ಕುಮಾರಸ್ವಾಮಿ
     ಭದ್ರಾವತಿ, ಜೂ. ೪: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಂದಿದ್ದ ಲೊಗೋ ಮತ್ತು ಟ್ರೇಡ್ ಮಾರ್ಕ್ ಕೇರಳ ರಾಜ್ಯದ ಪಾಲಾದ ಹಿನ್ನೆಲೆಯಲ್ಲಿ ಸಂಸ್ಥೆಗೆ ಹೊಸದಾಗಿ ಪ್ರಪ್ರಥಮ ಆದ್ಯ ವಚನಕಾರ, ನೇಕಾರರ ಸಂತ 'ಶ್ರೀ ದೇವರ ದಾಸಿಮಯ್ಯ' ನವರ ಹೆಸರನ್ನು ನಾಮಕರಣ ಮಾಡುವಂತೆ ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ಹಾಗು ದೇವಾಂಗ ಪರಿಷತ್ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
   ಟ್ರೇಡ್ ಮಾರ್ಕ್ ರಿಜಿಸ್ಟ್ರಾರ್ ನೀಡಿರುವ ತೀರ್ಪು ಕುರಿತು ರಾಜ್ಯ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಒಂದು ವೇಳೆ ಈ ನಿಟ್ಟಿನಲ್ಲಿ ಸರ್ಕಾರ ಮುಂದಿನ ದಿನಗಳಲ್ಲಿ ಯಾವುದೇ ರೀತಿ ಹೋರಾಟ ನಡೆಸದೆ ತಟಸ್ಥವಾಗಿ ಉಳಿದ್ದಲ್ಲಿ ಹಾಗು ಸಂಸ್ಥೆಗೆ ಹೊಸದಾಗಿ ಹೆಸರನ್ನು ನಾಮಕರಣ ಮಾಡುವುದಾದರೆ 'ಶ್ರೀ ದೇವರ ದಾಸಿಮಯ್ಯ'ನವರ ಹೆಸರನ್ನು ಪರಿಗಣಗೆ ತೆಗೆದುಕೊಳ್ಳಬೇಕು.
   ಶ್ರೀ ದೇವರ ದಾಸಿಮಯ್ಯನವರು ಆದ್ಯ ವಚನಕಾರರಾಗಿ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಈ ಹಿನ್ನಲೆಯಲ್ಲಿ ನಾಡಿನ ಸಮಸ್ತ ನೇಕಾರರ ಪರವಾಗಿ ಅವರ ಹೆಸರನ್ನು ಸಂಸ್ಥೆಗೆ ನಾಮಕರಣ ಮಾಡಬೇಕೆಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.    


3 comments: