Monday, September 20, 2021

ಏನು ಇಲ್ಲದವರನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತಂದ ಧೀಮಂತ ನಾಯಕ

    ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿ ಅವರೊಂದಿಗೆ ನನ್ನದು ಸುಮಾರು ೨೦ ವರ್ಷಗಳ ಒಡನಾಟ. ಸಾಮಾನ್ಯ ಕಾರ್ಯಕರ್ತನಾಗಿದ್ದರೂ ಸಹ ನನ್ನನ್ನು ಗುರುತಿಸಿ ನೆಲೆ ಕಲ್ಪಿಸಿಕೊಟ್ಟರು. ಅಪ್ಪಾಜಿ ಅವರು ಇಂದಿಗೂ, ಮುಂದೆಯೂ ಅವರೇ ನನ್ನ ರಾಜಕೀಯ ಗುರುಗಳು ಎಂದು ಸಿದ್ದಾಪುರ ನಿವಾಸಿ, ನಗರಸಭೆ ಮಾಜಿ ಸದಸ್ಯ ಅನಿಲ್‌ಕುಮಾರ್ ನೆನಪಿಸಿಕೊಳ್ಳುತ್ತಾರೆ.
    ಅಪ್ಪಾಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆಯಂದು ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಅನಿಲ್‌ಕುಮಾರ್ ಅವರು, ಅಪ್ಪಾಜಿ ಅವರು ಹೊಂದಿದ್ದ ವಿಶಿಷ್ಟವಾದ ತಮದೇ ಆದ ಹೋರಾಟದ ಗುಣಗಳು, ಬಡವರು ಮತ್ತು ದೀನದಲಿತರ ಬಗೆಗಿನ ಕಾಳಜಿ, ಅಭಿವೃದ್ಧಿ ಪರವಾದ ಚಿಂತನೆಗಳಿಗೆ ಮಾರುಹೋಗಿ ನಾನು ಅವರೊಂದಿಗೆ ಯಾವುದೇ ಸ್ವಾರ್ಥವಿಲ್ಲದೆ ಗುರುತಿಸಿಕೊಂಡಿದ್ದೇನೆ. ಅಪ್ಪಾಜಿ ಅವರೇ ನನಗೆ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಮೂಲಕ ನಾನು ಸಹ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಕಾರಣಕರ್ತರಾಗಿದ್ದರು.
    ಅಲ್ಲದೆ ಅವರ ನಿಧನದ ನಂತರವೂ ನಾನು ರಾಜಕೀಯವಾಗಿ ಭವಿಷ್ಯದಲ್ಲಿ ಗುರುತಿಸಿಕೊಳ್ಳುವಂತೆ ನನ್ನ ಪತ್ನಿ ಆರ್. ನಾಗರತ್ನ ಅವರಿಗೂ ಈ ಬಾರಿ ಚುನಾವಣೆಯಲ್ಲಿ ಅಪ್ಪಾಜಿ ಕುಟುಂಬದವರು ಅವಕಾಶ ಮಾಡಿಕೊಡುವ ಮೂಲಕ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲು ಕಾರಣಕರ್ತರಾಗಿದ್ದಾರೆ. ನಮಗೆ ಲಭಿಸಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ಅಪ್ಪಾಜಿ ಅವರ ಆದರ್ಶತನಗಳನ್ನು ಮೈಗೂಡಿಸಿಕೊಂಡು ಜನರ ಸೇವೆಯಲ್ಲಿ ತೊಡಗುತ್ತೇವೆ ಎಂದರು.

No comments:

Post a Comment