Monday, September 20, 2021

ಜನಸೇವೆಗೆ ಅವಕಾಶ ಮಾಡಿಕೊಟ್ಟ ಧೀಮಂತ ನಾಯಕ

    ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿ ಅವರೊಂದಿಗೆ ಸುಮಾರು ೧೫ ವರ್ಷಗಳ ಒಡನಾಟ ನನ್ನದು. ಅಪ್ಪಾಜಿಯವರ ಹೋರಾಟದ ಗುಣಗಳು, ಬಡವರ ಬಗೆಗಿನ ಕಾಳಜಿಯಿಂದಾಗಿ ಆರಂಭದಿಂದಲೂ ಅವರೊಂದಿಗೆ  ಸಾಮಾನ್ಯ ಕಾರ್ಯಕರ್ತನಾಗಿಯೇ ಇರಬೇಕೆಂದು ಬಯಸಿದ್ದೆ. ಕೊನೆ ಘಳಿಗೆಯಲ್ಲಿ  ಅವರ ನಿಧನದ ನಂತರ ನಗರಸಭೆ ಸದಸ್ಯನಾಗಿ ಜನರ ಸೇವೆ ಮಾಡಲು ಅವಕಾಶ ಲಭಿಸಿದೆ ಎಂದು ನಗರಸಭೆ ವಾರ್ಡ್  ನಂ.೨೪ರ  ಸದಸ್ಯ ಕೋಟೇಶ್ವರ್ ರಾವ್ ನೆನಪು ಮಾಡಿ ಕೊಳ್ಳುತ್ತಾರೆ.
      ಅಪ್ಪಾಜಿಯವರ  ಮೊದಲ ವರ್ಷದ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಕೋಟೇಶ್ವರ ರಾವ್  ಅವರು, ಅಪ್ಪಾಜಿಯವರು ನನ್ನ ರಾಜಕೀಯ ಗುರುಗಳು. ಅವರೊಂದಿಗೆ ನಾನು ಕೊನೆಯವರೆಗೂ ಸಾಮಾನ್ಯ ಕಾರ್ಯಕರ್ತನಾಗಿಯೇ ಇದ್ದೆ. ಅವರೊಂದಿಗಿನ ಒಡನಾಟ,  ನಾನು ಸಹ  ಜನರ ಸೇವೆ ಮಾಡಬೇಕೆಂಬ ಬಯಕೆ ಮೂಡಲು ಕಾರಣವಾಯಿತು.  ಆದರೂ ಸಹ ಅಪ್ಪಾಜಿ ಅವರಿಂದ ವೈಯಕ್ತಿಕವಾಗಿ ನಾನು ಏನನ್ನು  ಬಯಸಲಿಲ್ಲ. ಅವರು ಎಂದಿಗೂ ಕ್ಷೇತ್ರದ ಶಾಸಕರಾಗಿರಬೇಕೆಂಬ ಆಸೆ ನನ್ನದಾಗಿತ್ತು. ಈ ಹಿನ್ನೆಲೆಯಲ್ಲಿ ನಾನು ಕೊನೆಯವರೆಗೂ ಸಾಮಾನ್ಯ ಕಾರ್ಯಕರ್ತನಾಗಿರಲು ಬಯಸಿದ್ದೆ. ಆದರೂ ಅವರ ನಿಧನದ ನಂತರ ಅಪ್ಪಾಜಿ ಅವರ ಆಶೀರ್ವಾದದಿಂದ ನನಗೂ ಸಹ ಜನರ ಸೇವೆ ಮಾಡುವ ಅವಕಾಶ ಲಭಿಸಿತು.  ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಪ್ಪಾಜಿಯವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತೇನೆ ಎಂದರು.

No comments:

Post a Comment