ಭದ್ರಾವತಿ, ಫೆ. ೧೬ : ಕೃಷಿ ಇಲಾಖೆ ವತಿಯಿಂದ ೨೦೨೨-೨೩ನೇ ಸಾಲಿನ ಕೃಷಿ ಸಂಸ್ಕರಣಾ ಯೋಜನೆಯಡಿ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡಲು ಲಭ್ಯವಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಲಾಗಿದೆ.
ಇತರೆ ವರ್ಗದ ರೈತರಿಗೆ ಶೇ.೫೦ರಷ್ಟು ಹಾಗು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರುಗಳಿಗೆ ಶೇ.೯೦ರಷ್ಟು ರಿಯಾಯಿತಿಯಲ್ಲಿ ಯಂತ್ರೋಪಕರಣಗಳನ್ನು ಮಾರಾಟ ಮಾಡಲಾಗುವುದು.
ಮಿನಿ ರೈಸ್ ಮಿಲ್(೩ ಮತ್ತು ೫ ಎಚ್.ಪಿ ವರೆಗೆ), ಎಣ್ಣೆ ತೆಗೆಯುವ ಗಾಣ, ರಾಗಿ ಪಾಲಿಶ್ ಯಂತ್ರ, ರಾಗಿ ಕ್ಲೀನಿಂಗ್ ಯಂತ್ರ, ಕಬ್ಬು ಜ್ಯೂಸ್ ಮಾಡುವ ಯಂತ್ರ, ಕಬ್ಬು ಕ್ರಷರ್, ಹಿಟ್ಟಿನ ಗಿರಣಿ, ಪಲ್ವರೈಸರ್, ರವಾ ಮಾಡುವ ಯಂತ್ರ, ಕಾರದ ಪುಡಿ ಮಾಡುವ ಯಂತ್ರ ಮತ್ತು ಶಾವಿಗೆ ಮಾಡುವ ಯಂತ್ರಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗೆ ಕೃಷಿ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಲು ಕೃಷಿ ಅಧಿಕಾರಿ ರಾಕೇಶ್ ಕೋರಿದ್ದಾರೆ.
No comments:
Post a Comment