ಪ್ರಕಾಶ್ ಎಂ. ಚನ್ನಪ್ಪನವರ್
ಭದ್ರಾವತಿ: ನಗರಸಭೆ ಪೌರಾಯುಕ್ತರಾಗಿ ಕರ್ನಾಟಕ ಪೌರಾಡಳಿತ ಇಲಾಖೆ ಗ್ರೇಡ್-೧ ಅಧಿಕಾರಿ ಪ್ರಕಾಶ್ ಎಂ. ಚನ್ನಪ್ಪನವರ್ ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆ ಸವದತ್ತಿ ಪುರಸಭೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚನ್ನಪ್ಪನವರ್ ಅವರನ್ನು ಸರ್ಕಾರ ಪೌರಾಯುಕ್ತ ಹುದ್ದೆಗೆ ವರ್ಗಾವಣೆಗೊಳಿಸಿದ್ದು, ನಗರಸಭೆ ವ್ಯವಸ್ಥಾಪಕಿ ಸುನೀತಾ ಕುಮಾರಿ ಅವರಿಂದ ಅಧಿಕಾರ ಹಸ್ತಾಂತರಿಸಿಕೊಂಡರು.
ಈ ಹಿಂದೆ ಪೌರಾಯುಕ್ತರಾಗಿದ್ದ ಎಚ್.ಎಂ ಮನುಕುಮಾರ್ ಅವರನ್ನು ಸರ್ಕಾರ ನೆಲಮಂಗಲ ನಗರಸಭೆಗೆ ವರ್ಗಾವಣೆಗೊಳಿಸಿದ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹುದ್ದೆ ಖಾಲಿಯಾಗಿ ಉಳಿದಿತ್ತು.
ನೂತನ ಪೌರಾಯುಕ್ತ ಚನ್ನಪ್ಪನವರನ್ನು ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಸೇರಿದಂತೆ ಸದಸ್ಯರು ಸ್ವಾಗತಿಸಿ ಅಭಿನಂದಿಸಿದ್ದಾರೆ.
No comments:
Post a Comment