ಬುಧವಾರ, ಡಿಸೆಂಬರ್ 20, 2023

ಹಾಡುಹಗಲೇ ಮದ್ಯದಂಗಡಿಯಲ್ಲಿ ಆಟೋಚಾಲಕನ ಹತ್ಯೆ : ಪೊಲೀಸರ ಮುಂಚಿನ ಕಾರ್ಯಾಚರಣೆ ಮೂವರ ಸೆರೆ

ಭದ್ರಾವತಿ: ನಗರದ ಬಿ.ಹೆಚ್.ರಸ್ತೆಯ ಭದ್ರಾವೈನ್ಸ್ ಮದ್ಯದಂಗಡಿಯಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆಗೈದಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದ್ದು, ಅಂಗಡಿ ಮುಂಭಾಗ ಜನಸಂದಣಿ ಕಂಡು ಬಂದಿತು.
    ಭದ್ರಾವತಿ: ನಗರದ ಬಿ.ಹೆಚ್.ರಸ್ತೆಯ ಭದ್ರಾವೈನ್ಸ್ ಮದ್ಯದಂಗಡಿಯಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆಗೈದಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
    ಹತ್ಯೆಯಾದ ವ್ಯಕ್ತಿ ಹಿರಿಯೂರು ಗ್ರಾಮದ ನಿವಾಸಿ, ಆಟೋಚಾಲಕ ಹೇಮಂತ್(೪೦) ಅಲಿಯಾಸ್ ಕರಿಚುಕ್ಕಿ ಎಂಬುದಾಗಿ ಗುರುತಿಸಲಾಗಿದೆ. ಈತ ಮಧ್ಯಾಹ್ನ ೧೧.೩೦ರ ಸುಮಾರಿಗೆ ಮದ್ಯದಂಗಡಿಯಲ್ಲಿ ಕುಳಿತಿರುವ ವೇಳೆ ಈ ಕೃತ್ಯ ನಡೆದಿದೆ.
    ಹಳೆದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಉಳಿದ ಇಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆ.  ಬೊಮ್ಮನಕಟ್ಟೆ ಗ್ರಾಮದ ಮುಬಾರಕ್, ಸತ್ಯಾನಂದ, ಕಲೀಲ್ ಬಂಧಿತ ಆರೋಪಿಗಳಾಗಿದ್ದಾರೆ. ಘಟನೆ ಕುರಿತಂತೆ ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ