ಭದ್ರಾವತಿ ನಗರದ ಬೊಮ್ಮನಕಟ್ಟೆ, ಮೂಲೆಕಟ್ಟೆ ಸಮೀಪ ನಗರಸಭೆ ನೀರಿನ ಪಂಪ್ ಹೌಸ್ ಬಳಿ ಶುಕ್ರವಾರ ಸ್ಪೋಟಕ ಸಿಡಿದು ಹಸು ಮೃತಪಟ್ಟಿರುವ ಘಟನೆ ನಡೆದಿದೆ.
ಭದ್ರಾವತಿ: ನಗರದ ಬೊಮ್ಮನಕಟ್ಟೆ, ಮೂಲೆಕಟ್ಟೆ ಸಮೀಪ ನಗರಸಭೆ ನೀರಿನ ಪಂಪ್ ಹೌಸ್ ಬಳಿ ಶುಕ್ರವಾರ ಸ್ಪೋಟಕ ಸಿಡಿದು ಹಸು ಮೃತಪಟ್ಟಿರುವ ಘಟನೆ ನಡೆದಿದೆ.
ತೋಟ, ಜಮೀನು, ಹೊಲಗಳಲ್ಲಿ ಹಂದಿ ಓಡಿಸಲು ಬಳಸುವ ಸ್ಪೋಟಕ ಹೆಚ್ಚಿನ ಪ್ರಮಾಣದಲ್ಲಿ ಒಂದೇ ಸ್ಥಳದಲ್ಲಿ ಭೂಮಿಯಲ್ಲಿ ಸಂಗ್ರಹಿಸಿಟ್ಟಿದ್ದ ಕಾರಣ ಅದರ ಮೇಲೆ ಹಸು ಕಾಲಿನಿಂದ ತುಳಿದಿದೆ ಇದರಿಂದಾಗಿ ಸ್ಪೋಟಗೊಂಡು ಹಸುವಿನ ಎರಡು ಕಾಲು ಕತ್ತರಿಸಿ ಹೋಗಿದ್ದು, ಹೊಟ್ಟೆ ಸೀಳಿ ಹೋಗಿ ಮೃತಪಟ್ಟಿದೆ. ಉಳಿದಂತೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೇಪರ್ ಠಾಣೆ ಪೊಲೀಸರು, ಬಾಂಬು ನಿಷ್ಕ್ರಿಯ ದಳ, ಶ್ವಾನ ದಳ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಪೋಟದ ತೀವ್ರತೆ ವ್ಯಾಪಕವಾಗಿದ್ದು, ಬೊಮ್ಮನಕಟ್ಟೆ, ಹುಡ್ಕೋಕಾಲೋನಿ, ಬುಳ್ಳಾಪುರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸ್ಪೋಟದ ಸದ್ದು ಕೇಳಿ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.
ಸ್ಪೋಟಕ ಒಂದೆಡೆ ಸಂಗ್ರಹಿಡಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ನಂತರ ಸತ್ಯಾಂಶ ಹೊರ ಬೀಳಲಿದೆ.
No comments:
Post a Comment