Tuesday, April 27, 2021

ಸ್ನೇಹ ಜೀವಿ ಬಳಗದ ಮುಂಚೂಣಿ ನಾಯಕ ಎಸ್. ಸತೀಶ್ ಕೊರೋನಾ ಸೋಂಕಿಗೆ ಬಲಿ

ಎಸ್. ಸತೀಶ್
   ಭದ್ರಾವತಿ, ಏ. ೨೭: ನಗರದ ಸ್ನೇಹ ಜೀವಿ ಬಳಗದ ಸಮಾಜ ಸೇವೆಯ ಮುಂಚೂಣಿ ನಾಯಕ, ಪೊಲೀಸ್ ಉಮೇಶ್ ಸಹೋದರ ಎಸ್. ಸತೀಶ್ ಮಂಗಳವಾರ ನಿಧನ ಹೊಂದಿದರು.
    ಕೆಲವು ದಿನಗಳ ಹಿಂದೆ ಕೊರೋನಾ ೨ನೇ ಅಲೆ ಸೋಂಕಿಗೆ ಒಳಗಾಗಿದ್ದ ಎಸ್. ಸತೀಶ್(49) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ೩೨ನೇ ವಾರ್ಡ್ ಪಕ್ಷೇತರ ಅಭ್ಯರ್ಥಿಯಾಗಿರುವ ಪತ್ನಿ ಲತಾ, ಇಬ್ಬರು ಗಂಡು ಮಕ್ಕಳು, ತಂದೆ ಹಾಗು ಸಹೋದರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಸಂಜೆ ನೆರವೇರಿತು. 
       ಸತೀಶ್‌ರವರು ಸಹೋದರ ಪೊಲೀಸ್ ಉಮೇಶ್ ನೇತೃತ್ವದಲ್ಲಿ ಸ್ನೇಹ ಜೀವಿ ಬಳಗ ಹುಟ್ಟು ಹಾಕುವ ಮೂಲಕ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ನೆರವೇರಿಸಿಕೊಂಡು ಬಂದಿದ್ದರು. ಅಲ್ಲದೆ ಕೊರೋನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಮುಂದಾಗಿದ್ದರು. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

No comments:

Post a Comment